ಕಲ್ಪನೆಗಳ ಕನವರಿಕೆಯಲ್ಲಿ ಮನಸಿಗೆ ತೋಚಿದ ಹಾಗೆ ಗೀಚಿದ ಎರಡು ಕವನಗಳು..
ನೀ ಸನಿಹಕೆ ಬರ ಬಾರದೆ
ಅಂದು ನೀನಿದ್ದೆ ನೆರಳಿನಂತೆ ನನ್ನ ಹಿಂದೆ
ನಿನ್ನ ಬಾಳಿಗೆ ನಾ ಬೆಳಕಾಗಿ ಬರುವೆ ಎಂದೆ
ಹಗಲಿರುಳು ನನ್ನ ಸನಿಹದಲೇ ಸುಳಿದೆ
ಕಣ್ಣ ಕನಸುಗಳಲ್ಲೂ ಎಡ ಬಿಡದೆ ಕಾಡಿದೆ
ಇಂದು ನನನ್ನು ಕತ್ತಲಲಿ ಬಿಟ್ಟು ಹೋದೆ
ನೂರು ಭಾವಗಳನು ಮೀಟಿ ಮರೆಯಾದೆ
ಹಗಲಿರುಳು ನಿನ್ನ ನೆನಪನ್ನೇ ನಾ ನೆನೆದೆ
ಒಮ್ಮೆಯಾದರು ನೀ ಸನಿಹಕೆ ಬರ ಬಾರದೆ?????????
ಮರೆತು ಬಿಡು ನನ್ನನ್ನು....
ಮರೆತು ಬಿಡು ನನ್ನನ್ನು....
ನೆನಯದಿರು ಇನ್ನೆಂದು....
ನೋಡಿದಿರು ಹಿಂದಿರುಗಿ ....
ಕಾಡದಿರು ಕನಸಲ್ಲೂ....
ನಿಲ್ಲದಿರು ಮನಸಲ್ಲೂ....
ಬಾರದಿರು ನೆನಪಲ್ಲೂ..
ನೀನಿಲ್ಲದೆ ಜಗವಿಲ್ಲ ಎಂದು ಅನಿಸಿತ್ತು ಅಂದು
ನಿನ್ನದಲ್ಲದ ಜಗವುಂಟು ಅಂತನಿಸಿದೆ ಇಂದು..
Tuesday, July 12, 2011
Thursday, June 9, 2011
Tuesday, May 10, 2011
ಜೀವನ ಯಾನದ ಮುಸ್ಸಂಜೆಯಲಿ
ನಮ್ಮ ಪ್ರೀತಿಯ ಗೆಳೆಯ ಪ್ರವೀಣ್ ಭಟ್ ರವರು ಒಂದು ಚಿತ್ರದ ಬಗೆಗೆ ಒಂದು ಕವನ ಬರೆದಿದ್ದಾರೆ (http://nenapinasalu.blogspot.com/), ಆ ಒಂದು ಚಿತ್ರವನ್ನು ನೋಡಿದಾಗ ನನಗೆ ತೋಚಿದ ಹಾಗೆ ಒಂದು ಕವನ ಬರೆದ್ದಿದ್ದೇನೆ ಮನಸಿಗೆ ಸಿಕ್ಕ ಪದಗಳನ್ನು ಒಂದೆಡೆ ಸೇರಿಸಿ ನಿಮ್ಮ ಮುಂದಿಟ್ಟಿದ್ದೀನಿ ಹೇಗಿದೆ ಎಂದು ತಿಳಿಸಿ
(ಚಿತ್ರ ಕೃಪೆ : ಪ್ರವೀಣ್ ಭಟ್ -http://nenapinasalu.blogspot.com/)
ಎಂದೋ ಕಳೆದ ನಿನ್ನೆಯ ಮರೆಯುತ
ಎಂದೋ ಬರುವ ನಾಳೆಯ ನೆನೆಯುತ
ಸಾಗುತಿದೆ ಜೀವನವೆಂಬ ಪಯಣದ ರಥ
ಮನವು ಮಾಗಿಯುದು ದೇಹವು ಬಾಗಿಹುದು
ಮುಗವು ಬಾಡಿಹುದು ಮುಗ್ದತೆ ಮಾತ್ರವದು
ಎಂದಿನಂತೆ ಇಹುದು ದಗ್ಧ ಮನದ ಒಳಗೆ
ಅಂದು ಎಲ್ಲರು ನನ್ನವರೆ ನನ್ನೊಳಗೆ ಬಲವಿದ್ದಾಗ
ಇಂದು ಎಲ್ಲರು ಪರರೆ ನನ್ನಲಿ ಏನು ಇಲ್ಲವೀಗ
ನಾನಂದು ನಗುತಿದ್ದಾಗ ಜೊತೆಗಿದ್ದರು ನಾಲ್ಕಾರು ಜನ
ಇಂದು ನಾ ಅಳುತಿರುವಾಗ ಉಳಿದಿಹುದು ಬರಿ ಮೌನ
ಅಂದು ನೀಡುತ್ತಿದ್ದ ಕೈಗಳಿವು ಇಂದು ಬೇಡುತ್ತಿರುವಾಗ
ಅಂದು ಬೇಡುತ್ತಿದ್ದ ಕೈಗಳವು ಇಂದು ನಿಂತು ನೋಡುತ್ತಿವೆ
ಕಣ್ಣಂಚಿನಲ್ಲೊಂದು ಹನಿ ಕಣ್ಣೀರು
ಮನದಾಳದಲ್ಲೊಂದು ನಿಟ್ಟುಸಿರು
ಬಿಟ್ಟು ಬಿಡದೆ ಬರುತಿಹ ಭಾವವದು
ಕಟ್ಟ ಕಡೆಯವರೆಗಿರುವ ನೋವೆ ಇದು
ಕಾಯಿತ್ತಿರುವೆ ನಾನು ಆ ದಿನವ
ಸೊರಗುತ್ತಿರುವ ಈ ದೇಹವು
ಮಣ್ಣಲ್ಲಿ ಮಣ್ಣಾಗುವ ಆ ಕ್ಷಣವ.....
ಇಂತಹ ಒಂದು ಪ್ರಯತ್ನಕ್ಕೆ ನಾಂದಿ ಆದ ಪ್ರೀತಿಯ ಗೆಳೆಯ ಪ್ರವೀಣ್ ಭಟ್ ಅವರಿಗೆ ವಂದನೆಗಳು
--
ಸತೀಶ್ ಬಿ ಕನ್ನಡಿಗ
ಎಂದೋ ಕಳೆದ ನಿನ್ನೆಯ ಮರೆಯುತ
ಎಂದೋ ಬರುವ ನಾಳೆಯ ನೆನೆಯುತ
ಸಾಗುತಿದೆ ಜೀವನವೆಂಬ ಪಯಣದ ರಥ
ಮನವು ಮಾಗಿಯುದು ದೇಹವು ಬಾಗಿಹುದು
ಮುಗವು ಬಾಡಿಹುದು ಮುಗ್ದತೆ ಮಾತ್ರವದು
ಎಂದಿನಂತೆ ಇಹುದು ದಗ್ಧ ಮನದ ಒಳಗೆ
ಅಂದು ಎಲ್ಲರು ನನ್ನವರೆ ನನ್ನೊಳಗೆ ಬಲವಿದ್ದಾಗ
ಇಂದು ಎಲ್ಲರು ಪರರೆ ನನ್ನಲಿ ಏನು ಇಲ್ಲವೀಗ
ನಾನಂದು ನಗುತಿದ್ದಾಗ ಜೊತೆಗಿದ್ದರು ನಾಲ್ಕಾರು ಜನ
ಇಂದು ನಾ ಅಳುತಿರುವಾಗ ಉಳಿದಿಹುದು ಬರಿ ಮೌನ
ಅಂದು ನೀಡುತ್ತಿದ್ದ ಕೈಗಳಿವು ಇಂದು ಬೇಡುತ್ತಿರುವಾಗ
ಅಂದು ಬೇಡುತ್ತಿದ್ದ ಕೈಗಳವು ಇಂದು ನಿಂತು ನೋಡುತ್ತಿವೆ
ಕಣ್ಣಂಚಿನಲ್ಲೊಂದು ಹನಿ ಕಣ್ಣೀರು
ಮನದಾಳದಲ್ಲೊಂದು ನಿಟ್ಟುಸಿರು
ಬಿಟ್ಟು ಬಿಡದೆ ಬರುತಿಹ ಭಾವವದು
ಕಟ್ಟ ಕಡೆಯವರೆಗಿರುವ ನೋವೆ ಇದು
ಕಾಯಿತ್ತಿರುವೆ ನಾನು ಆ ದಿನವ
ಸೊರಗುತ್ತಿರುವ ಈ ದೇಹವು
ಮಣ್ಣಲ್ಲಿ ಮಣ್ಣಾಗುವ ಆ ಕ್ಷಣವ.....
ಇಂತಹ ಒಂದು ಪ್ರಯತ್ನಕ್ಕೆ ನಾಂದಿ ಆದ ಪ್ರೀತಿಯ ಗೆಳೆಯ ಪ್ರವೀಣ್ ಭಟ್ ಅವರಿಗೆ ವಂದನೆಗಳು
--
ಸತೀಶ್ ಬಿ ಕನ್ನಡಿಗ
Monday, May 2, 2011
ಗೆಳತಿ ನಾ ಮರೆತರೂ ಮರೆಯಲಾರೆ ನಿನ್ನ ..............
ಗೆಳತಿ ನಾ ಮರೆತರೂ ಮರೆಯಲಾರೆ ನಿನ್ನ
ನಾನರಿಯೆ ನೀ ಹೇಗೆ ಮರೆತೆಯೋ ನನ್ನ
ನೆನಪುಗಳಲ್ಲು ನೀನಿರುವೆ
ಕನಸುಗಳಲ್ಲು ನೀ ಬರುವೆ
ಅರಿತು ಅರಿಯದಂತೆಯೇ
ನನ್ನೊಳು ನೀ ಬೆರೆತುಹೋಗಿರುವಾಗ.
ನಿನ್ನನು ನಾ ಮರೆತು ಹೋಗಲೆಂತು??
ನೆನಪುಗಳು ಕನಸುಗಳಾಗಿ
ಕನಸುಗಳು ನೆನೆಪುಗಳಾಗಿ
ಕಣ್ಣೀರಿನಲಿ ಕರಗಿ ಹೋಗಿ
ಮನಸಿನೊಳು ಮರುಗಿ
ಮರೆತೆನೆಂದರೂ ಮರೆಯದ ನೆನಪು ನೀನು
ಬಿಟ್ಟೆನೆಂದರೂ ಬಿಡದ ಮಾಯೆಯು ನೀನು
ಇಂತಾದರು ನೀ ನನ್ನ ಮರೆತೇ ಹೋದೆಯೇನು
ಮುಂದೆ ಎಂದಾದರು ನೆನೆದುಕೊಳ್ಳುವೆಯೇನು??
ನಾನರಿಯೆ ನೀ ಹೇಗೆ ಮರೆತೆಯೋ ನನ್ನ
ನೆನಪುಗಳಲ್ಲು ನೀನಿರುವೆ
ಕನಸುಗಳಲ್ಲು ನೀ ಬರುವೆ
ಅರಿತು ಅರಿಯದಂತೆಯೇ
ನನ್ನೊಳು ನೀ ಬೆರೆತುಹೋಗಿರುವಾಗ.
ನಿನ್ನನು ನಾ ಮರೆತು ಹೋಗಲೆಂತು??
ನೆನಪುಗಳು ಕನಸುಗಳಾಗಿ
ಕನಸುಗಳು ನೆನೆಪುಗಳಾಗಿ
ಕಣ್ಣೀರಿನಲಿ ಕರಗಿ ಹೋಗಿ
ಮನಸಿನೊಳು ಮರುಗಿ
ಮರೆತೆನೆಂದರೂ ಮರೆಯದ ನೆನಪು ನೀನು
ಬಿಟ್ಟೆನೆಂದರೂ ಬಿಡದ ಮಾಯೆಯು ನೀನು
ಇಂತಾದರು ನೀ ನನ್ನ ಮರೆತೇ ಹೋದೆಯೇನು
ಮುಂದೆ ಎಂದಾದರು ನೆನೆದುಕೊಳ್ಳುವೆಯೇನು??
Friday, April 15, 2011
ಕತ್ತಲೆಯ ಕೋಣೆಯೊಳು ಕಂಡಂತ ಕನಸುಗಳು
ಕತ್ತಲೆಯ ಕೋಣೆಯೊಳು ಕಂಡಂತ ಕನಸುಗಳು
ಕಲ್ಪನೆಯ ಲೋಕದೊಳು ಸಿಗದಂತ ನೆನಪುಗಳು
ಕಣ್ಣಿನೊಳಗಷ್ಟು ಬಣ್ಣವನು ತುಂಬಿದವರ್ಯಾರೋ
ಮನಸಿನೊಳು ಭಾವವನ್ನು ಬಿತ್ತಿದವರ್ಯಾರೋ
ಭಾವದೊಳು ಬಂಧನವ ಬೇರೆಸಿದವರ್ಯಾರೋ
ಬಂಧನದೊಳು ಭಾಂದವ್ಯ ಬೆಳೆಸಿದವರ್ಯಾರೋ
ಎಲ್ಲವನು ನನ್ನೊಳಗೆ ತಂದವರು ಯಾರೋ ನಾನರಿಯೆ..
ಕಲ್ಪನೆಯ ಲೋಕದೊಳು ಸಿಗದಂತ ನೆನಪುಗಳು
ಕಣ್ಣಿನೊಳಗಷ್ಟು ಬಣ್ಣವನು ತುಂಬಿದವರ್ಯಾರೋ
ಮನಸಿನೊಳು ಭಾವವನ್ನು ಬಿತ್ತಿದವರ್ಯಾರೋ
ಭಾವದೊಳು ಬಂಧನವ ಬೇರೆಸಿದವರ್ಯಾರೋ
ಬಂಧನದೊಳು ಭಾಂದವ್ಯ ಬೆಳೆಸಿದವರ್ಯಾರೋ
ಎಲ್ಲವನು ನನ್ನೊಳಗೆ ತಂದವರು ಯಾರೋ ನಾನರಿಯೆ..
Subscribe to:
Comments (Atom)